CM’s BLOG

ಆಚಾರ್ಯ ದೇವೋಭವ

Wednesday, February 15th, 2012

ಆಚಾರ್ಯ ದೇವೋಭವ -ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ನನ್ನ ಬದುಕನ್ನು ರೂಪಿಸಿದ, ಗುರುಸಮಾನರೇ ಆಗಿದ್ದ, ಬಂಧುಬಾಧವರಿಗಿಂತಲೂ ಮಿಗಿಲಾದ ಸ್ಥಾನದಲ್ಲಿದ್ದ ಡಾ|ವಿ.ಎಸ್.ಆಚಾರ್ಯ ಅವರನ್ನು ಕಳೆದುಕೊಂಡು ನಾನು ವಸ್ತುಶಃ ಅನಾಥನಾಗಿದ್ದೇನೆ ಅನಿಸುತ್ತಿದೆ. ನನ್ನ ಉದ್ದಶಿತ ಹಾದಿಯಲ್ಲಿ ನಾನು ಏಕಾಂಗಿಯಾದೆನೋ ಎಂಬ ಒಂಟಿತನದ ಭಾವನೆ ಕಾಡುತ್ತಿದೆ. ನಾನು ಸಾಮಾಜಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮವಾಗಿ ಇಂದು ಯಾವುದೇ ಸ್ಥಾನಕ್ಕೆ ಏರಿದ್ದೇನೆ ಎಂದಾದರೆ ಅದಕ್ಕೆ ಡಾ| ಆಚಾರ್ಯರೇ ಕಾರಣಪುರಷರು. ನಿಜ ಅರ್ಥದಲ್ಲಿ ಅವರು ನನ್ನ ಆಚಾರ್ಯರು ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಯಾವುದೇ ಸಮಸ್ಯೆಗಳು ಬಂದರೂ ಅದಕ್ಕೆ ಅವರು [...]

ನಿಮ್ಮೆಲ್ಲರ ಸದಾಶಯಕ್ಕೆ ನನ್ನ ನಮನ

Friday, August 12th, 2011

ಎಷ್ಟೊಂದು ಸದಾಶಯಗಳು… ಎಷ್ಟೊಂದುಪ್ರೀತಿ… ಎಷ್ಟು ಅಭಿಮಾನ, ಏನೆಲ್ಲ ನಿರೀಕ್ಷೆಗಳು… ನನ್ನ ಜಾಲತಾಣಕ್ಕೆ ಬಂದ ನೂರಾರು ಅಭಿಮಾನದ ಮಿಂಚಂಚೆಗಳಿಗೆ ಏನೆಂದು ಪ್ರತಿಕ್ರಿಯಿಸಲಿ… ಈ ಪತ್ರಗಳನ್ನೆಲ್ಲ ನೋಡಿ ಅಚ್ಚರಿಗೊಂಡೆ. ನನ್ನನ್ನು ಖುದ್ದು ನೋಡಲಾಗದವರು, ದೂರದ ಊರಿನವರು, ನನ್ನ ಸಹಪಾಠಿಗಳು, ಪಕ್ಷವನ್ನು ಬೆಂಬಲಿಸುತ್ತ ಬಂದ ಹಿರಿಯ ಕಾರ್ಯಕರ್ತರು, ಮಾಜಿ ಸೇನಾಧಿಕಾರಿಗಳು, ಯುವಕರು ಎಲ್ಲರೂ ಬರೆದ ಈ ಪತ್ರಗಳನ್ನು ಸರಸರನೆ ನೋಡಿ ಈ ಬ್ಲಾಗ್ ಬರೆಯುತ್ತಿದ್ದೇನೆ. ನಾನೇನು ಜಾಲ ತಾಣದಲ್ಲಿ ನಾನೇ ಬರೆಯುವಷ್ಟು ಪಳಗಿದವನಲ್ಲ. ಆದರೆ ಎದೆಯೊಳಗೆ ಮಿಂಚಿದ ಭಾವಗಳನ್ನು ಹೇಳಿ ಬರೆಸಬಲ್ಲೆ. [...]